ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ
ಹಿರಿಯ ತರಳಬಾಳು ಜಗದ್ಗುರು
ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 28ನೆಯ ಶ್ರದ್ಧಾಂಜಲಿ ಪ್ರಯುಕ್ತ
ಭಕ್ತಿ ಸಮರ್ಪಣೆ
ಶಾಲಾ ಆವರಣದಲ್ಲಿ ಇರುವ ಶಿವಕುಮಾರ ಗುರುಗಳ ಮಂಟಪದಲ್ಲಿ ಶ್ರದ್ಧಾಂಜಲಿ ಅರ್ಪಣೆ |
* ಗುರುನಮನ :*
ಜಗದ ಇರುವನು ಗೆದ್ದ ಶಿವ ನೀ
ಜನರ ಹೃದಯವನರಿತ ಗುರು ನೀ
ಹೊಟ್ಟೆ ರಟ್ಟೇ ನೆತ್ತಿಗಿಳಿಸುತ ಸಲಹಿದ ತಾಯಿ ನೀ
ಹೊಗಳಿಕೆಗೆ ಕಿವಿಗೊಡದ ಮಹಂತ
ತೆಗಳಿಕೆಗೆ ಮನಸುಡದ ಧಿಮಂತ
ಪಟ್ಟ ಪಲ್ಲಕ್ಕಿ ಇಳಿದು ಭಕ್ತರೆಡೆಗೆ ನಡೆದ ಸ್ವಾಮಿ
ದಿಟ್ಟಹೆಜ್ಜೆ ಇಟ್ಟು ನಡೆದೆ ನೀ
ಮೆಟ್ಟಿ ಮೌಢ್ಯವ ಹುಸಿಯನಳಿಸಿದೆ
ತಂದೆನಿಷ್ಠುರ ತಾಯಮಮತೆಯ ತೋರಿದೈ ಗುರುವೆ
ಶಿವನೆ ನಿನಗೆಣೆ ಯಾರು ಉಂಟೈ
ಆಗಸಕೇ ಮಿತಿ ಮೇರೆ ಇರದು
ನೀ ನಡೆದ ಹಾದಿ ನುಡಿದ ವಾಣಿ ಎಮಗೆ ಪಾವನವು.
- *ಕಾವ್ಯಾತ್ಮದೇವನಗರಿ* (ಶಿವು ಕುರ್ಕಿ)
ಶಾಲಾ ಮಕ್ಕಳು ರಚಿಸಿರುವ ಪೂಜ್ಯ ಶ್ರೀಗಳವರ ಭಾವಚಿತ್ರ
ಮಕ್ಕಳು ಶ್ರೀಗಳವರ ಕುರಿತು ಬರೆದಿರುವ ಲೇಖನ