|
ಇಂದು ನಮ್ಮ ಶಾಲೆಯಲ್ಲಿ 2021-22 ನೇ ಸಾಲಿನ ಶಾಲಾ ಸಂಸತ್ತಿನ ಬಜೆಟ್ ನ್ನು ಶಾಲಾ ಸಂಸತ್ತಿನ ಹಣಕಾಸು ಮಂತ್ರಿಯಾದ ಕುಮಾರಿ ಹರ್ಷಿತ 9ನೇ ತರಗತಿ ಇವರು ಎಲ್ಲರ ಸಮ್ಮುಖದಲ್ಲಿ ಮಂಡಿಸಿದರು. ನಂತರ ಬಜೆಟ್ ಬಗೆಗೆ ಚರ್ಚೆಗೆ ಅವಕಾಶ ನೀಡಿ ಹಾಜರಿದ್ದ ಎಲ್ಲ ವಿದ್ಯಾರ್ಥಿಗಳ ಒಪ್ಪಗೆಯ ಮೇರೆಗೆ ಸಹಿಗಾಗಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು. ರಾಷ್ಟ್ರಪತಿಗಳಾದ ಮುಖ್ಯಶಿಕ್ಷಕ ಟಿ ಧನಂಜಯ ಬಜೆಟ್ ಪ್ರತಿಗೆ ಸಹಿ ಹಾಕುವುದರೊಂದಿಗೆ ಅನುಮೋದನೆ ನೀಡಿದರು. |
|
ದಿನಾಂಕ 30-12-2021 ರಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸಲು ಪೋಷಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ವಿದ್ಯಾರ್ಥಿಗಳ 3 ನೇ ರೂಪಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಕುರಿತು ಚರ್ಚಿಸಲಾಯಿತು. ಉತ್ತರ ಪತ್ರಿಕೆಗಳನ್ನು ಪೋಷಕರಿಗೆ ನೀಡಿ ಮಕ್ಕಳು ಇನ್ನೂ ಹೆಚ್ಚಿನ ಅಂಕಗಳಿಸಲು ಶಿಕ್ಷಕರೊಂದಿಗೆ ಪೋಷಕರೂ ಮನೆಗಳಲ್ಲಿ ಓದಲು ಉತ್ತೇಜನ ನೀಡುವಂತೆ ಮನವೊಲಿಸಲಾಯ್ತು.... |
|
ದಿನಾಂಕ 22-12-2021 ರಂದು ಬೆಳಗಿನ ಪ್ರಾರ್ಥನೆಯ ನಂತರ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಶ್ರೀನಿವಾಸ ರಾಮಾನುಜನ್ ಕುರಿತು ನಮ್ಮ ಶಾಲೆಯ ಗಣಿತ ಶಿಕ್ಷಕರಾದ ಕೆ ಶಿವಕುಮಾರ್ ಮಕ್ಕಳಿಗೆ ಉಪನ್ಯಾಸ ನೀಡಿದರು |
|
ಇಂದು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ವಾಲಿಬಾಲ್ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಬಹು ದಿನಗಳ ನಂತರ ಆಯೋಜಿಸಿದ್ದ ಈ ವಾಲಿಬಾಲ್ ಕ್ರೀಡಾಕೂಟದಲ್ಲಿ 4 ತಂಡಗಳು ಬಹಳ ಉತ್ಸಾಹದಿಂದ ಪಾಲ್ಗೊಂಡರು, ಶಿಕ್ಷಕರು ಮತ್ತು ಉಳಿದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮುಖ್ಯಶಿಕ್ಷಕರಾದ ಟಿ ಧನಂಜಯ ಕ್ರೀಡಾಕೂಟವನ್ನು ಉದ್ಘಾಟಿಸಿದರೆ ದೈಹಿಕ ಶಿಕ್ಷಣ ಶಿಕ್ಷಕರಾದ ಆರ್ ಗಿರೀಶ್ ಕ್ರೀಡಾಕೂಟ ನಡೆಸಿಕೊಟ್ಟರು. ಎಲ್ಲಾ ಶಿಕ್ಷಕರು ಇದರಲ್ಲಿ ಭಾಗವಹಿಸಿ ಕೊನೆಗೆ ಸ್ವತಃ ಶಿಕ್ಷಕರೂ ಒಂದು ಮ್ಯಾಚ್ ಆಡಿ ಮಕ್ಕಳನ್ನು ರಂಜಿಸಿದ್ದು ವಿಶೇಷವಾಗಿತ್ತು. |
|
ಇಂದು ನಮ್ಮ ಶಾಲೆಯಲ್ಲಿ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಯಿತು. ಈ ಕುರಿತು ಶಿಕ್ಷಕರಾದ ವಿ ಕೆ ಶಾಂತಕುಮಾರ ಮಾತನಾಡಿ ಮಾನವ ಹಕ್ಕುಗಳ ಅಗತ್ಯತೆ ಮತ್ತು ಮಾನವ ಹಕ್ಕುಗಳ ಆಯೋಗದ ಕುರಿತು ತಿಳಿಸಿಕೊಟ್ಟರು... |
|
ಇಂದು ನಮ್ಮ ಶಾಲೆಯ ಶಾಲಾ ಸಂಸತ್ತಿನ ಮೊದಲ ಸಚಿವ ಸಂಪುಟ ಸಭೆಯನ್ನು ಆಯೋಜಿಸಲಾಗಿತ್ತು. ಪ್ರಧಾನ ಮಂತ್ರಿಯನ್ನು ಒಳಗೊಂಡಂತೆ ಸಚಿವ ಸಂಪುಟದ ಎಲ್ಲ ಸಚಿವರೂ ಹಾಜರಾಗಿದ್ದರು. |
|
ಶಿಕ್ಷಕರು ಸಭೆಯಲ್ಲಿ ಈಗಾಗಲೇ ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಅವರು ನಿರ್ವಹಿಸಬೇಕಾದ ಕಾರ್ಯಗಳನ್ನು ತಿಳಿಸಿ ಅದರ ಬಗೆಗೆ ಚರ್ಚಿಸಿ ಮಾರ್ಗದರ್ಶನ ಮಾಡಲಾಯಿತು. ಪ್ರತಿಯೊಬ್ಬ ಸಚಿವರಿಗೆ ಅವರಿಗೆ ವಹಿಸಿದ ಖಾತೆಗಳ ನಿರ್ವಹಣೆಗೆ ಸಲಹೆಗಾರರಾಗಿ ಒಬ್ಬರು ಶಿಕ್ಷಕರು ಮತ್ತು 8-10 ವಿದ್ಯಾರ್ಥಿಗಳನ್ನು ಒಳಗೊಂಡ ತಂಡವನ್ನು ರಚಿಸಿಕೊಡಲಾಗುವುದು, ಅವರ ಸಹಕಾರದೊಂದಿಗೆ ತಮ್ಮ ತಮ್ಮ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ತಿಳಿಸಲಾಯಿತು. ನೂತನ ಸಚಿವರುಗಳು ಬಹು ಉತ್ಸಹದಿಂದ ಚರ್ಚೆಯಲ್ಲಿ ಪಾಲ್ಗೊಂಡರು... |
|
ಇಂದು ನಮ್ಮ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಸರಬರಾಜಾದ ಆಹಾರ ಧಾನ್ಯಗಳನ್ನು ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆಸಿ ವಿತರಿಸಲಾಯಿತು. |
|
ಇಂದು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಕೆನೆಭರಿತ ಬಿಸಿಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಯನ್ನು ಪುನರಾರಂಭ ಮಾಡಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರೂ ಹಾಜರಿದ್ದರು. |
|
ಇಂದು ನಮ್ಮ ಶಾಲೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರಾದ ಡಿ ಯೋಗೇಂದ್ರಪ್ಪ ಏಡ್ಸ್ ದಿನಾಚರಣೆಯ ಹಿನ್ನೆಲೆ, ರೋಗ ಲಕ್ಷಣ, ಹೆಚ್.ಐ.ವಿ ವೈರಸ್ ಕುರಿತು ಮಾತನಾಡಿದರು |
|
ಶಿಕ್ಷಕರಾದ ಟಿ ಕೆ ಶಿವಕುಮಾರ್ ಏಡ್ಸ್ ಹರಡುವ ಬಗೆಯನ್ನು ವಿವರಿಸಿದರು. ಮುಖ್ಯಶಿಕ್ಷಕರಾದ ಟಿ. ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. |
|
'ಶಾಲಾವಾಣಿ' ಮಾಸ ಪತ್ರಿಕೆ- ನವೆಂಬರ್ 2021 |
|
ಇಂದು ನಮ್ಮ ಶಾಲೆಯ ಚೊಚ್ಚಲ ಮಾಸ ಪತ್ರಿಕೆ 'ಶಾಲಾವಾಣಿ' ಯನ್ನ ಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಧನಂಜಯ ಬಿಡುಗಡೆ ಮಾಡಿದರು. ಇದು ಪ್ರತೀ ತಿಂಗಳು ಶಾಲೆಯಲ್ಲಿ ನಡೆದ ಚಟುವಟಿಕೆಗಳ ವರದಿ ಮತ್ತು ಮಕ್ಕಳ ಸೃಜನಶೀಲ ಬರಹಗಳಾದ ಕಥೆ, ಕವನ, ಡ್ರಾಯಿಂಗ್, ಲೇಖನ ಬರಹ, ಪ್ರಬಂಧ ಮುಂತಾದವುಗಳನ್ನು ಪ್ರಕಟಿಸಬೇಕೆಂಬ ಸದುದ್ದೇಶದಿಂದ ಹೊರಡಿಸಿದ ಪತ್ರಿಕೆಯಾಗಿದೆ.... |
-
ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಹಿರಿಯ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 28ನೆಯ ಶ್ರದ್ಧಾಂಜಲಿ ಪ್ರಯುಕ್ತ ಭಕ್ತಿ ...
-
ದಿನಾಂಕ 28-10-2021 ರಂದು ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮದ ಅಂಗವಾಗಿ ಕನ್ನಡ ತಾಯಿ ಭುವನೇಶ್ವರಿ ಪೋಟೋ ಜೊತೆಗೆ ಕನ್ನಡ ಘೋಷಣೆಗಳನ್ನು ಹಿಡಿದು ಊರಿನಲ್ಲಿ ಜಾಥಾ ನಡೆ...
-
-
ಇಂದು ನಮ್ಮ ಶಾಲೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ 130ನೇ ಜಯಂತಿಯನ್ನು ಆಚರಿಸಲಾಯಿತು.
-
ಇಂದು ನಮ್ಮ ಶಾಲೆಯಲ್ಲಿ ಗೊಪ್ಪೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕುಷ್ಟರೋಗ ವಿರೋದಿ ಮಾಸಾಚರಣೆ ಕಾರ್ಯವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸಿಬ್ಬಂದಿಗಳಾದ ವಿನ...
-
ದಿನಾಂಕ : 05-09-2021 ರಂದು ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ರೈತ ಸಂಪರ್ಕ ಕೇಂದ್ರ ಪಾಂಡೋಮಟ್ಟಿ ಮತ್ತು ಶ್ರೀ ರುದ್ರೇಶ್ವರ ಪ್ರೌಢಶಾಲೆಯ ಸಂಯುಕ್ತ ...
-
-
-
ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಶರಣ ಕೆ ಶಿವಲಿಂಗಪ್ಪನವರಿಂದ ಶಾಲಾ ಕಿರುಚಿತ್ರ ಬಿಡುಗಡೆ ಗಣರಾಜ್ಯೋತ್ಸವ ಆಚರಣೆ 26-01-2021 ಶಾಲೆಯ ಪ್ರವೇಶ ದ್ವಾರದ ನೋಟ
-
ಶಾಲಾ ಪ್ರಾರಂಭೋತ್ಸವದ ವೀಡಿಯೋ ಶಾಲಾ ಕ್ರಿಯಾ ಯೋಜನೆ 2020-21. PDF 1. ವಿದ್ಯಾರ್ಥಿಗಳನ್ನು ಶಾಲೆಗೆ ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವ ಶಿಕ್ಷಕ ವೃಂದ 2. ...